February 27, 2026

Land ownership scheme ಜಮೀನು ಖರೀದಿಗೆ ಸುವರ್ಣಾವಕಾಶ ಸರ್ಕಾರದಿಂದ 12.5 ಲಕ್ಷ ಸಬ್ಸಿಡಿ ವಿತರಣೆ. ಕೂಡಲೇ ಅರ್ಜಿ ಸಲ್ಲಿಸಿ.

Land ownership scheme ಸ್ವಂತ ಜಮೀನು ಹೊಂದುವುದು ಪ್ರತಿಯೊಬ್ಬ ಕೃಷಿ ಕಾರ್ಮಿಕರ ದೊಡ್ಡ ಕನಸು. ಆದರೆ ಹೆಚ್ಚುತ್ತಿರುವ ಭೂಮಿಯ ಬೆಲೆಗಳಿಂದಾಗಿ ಈ ಕನಸು ಬಹುತೆಕರಿಗೆ ಕೈಗೆಟುಕದಂತಾಗಿದೆ. ಇದನ್ನು ಮನಗಂಡು ಕರ್ನಾಟಕ ಸರ್ಕಾರವು ಭೂ ಒಡೆತನ ಯೋಜನೆ (Land Ownership Scheme) ಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಿದೆ.
2026ನೇ ಸಾಲಿನಲ್ಲಿ ಜಮೀನಿನ ದುಬಾರಿ ದರವನ್ನು ಪರಿಗಣಿಸಿ, ಯೋಜನೆಯ ಘಟಕ ವೆಚ್ಚವನ್ನು ಹೆಚ್ಚಿಸಿ ಬಡ ಮತ್ತು ಭೂಹೀನ ಮಹಿಳಾ ಕೃಷಿ ಕಾರ್ಮಿಕರಿಗೆ ಭರ್ಜರಿ ನೆರವು ಘೋಷಿಸಲಾಗಿದೆ.

ಭೂ ಒಡೆತನ ಯೋಜನೆ – ಪ್ರಮುಖ ಅಂಶಗಳು (Highlights)
ಯೋಜನೆ ಯಾರಿಗೆ?

SC/ST ವರ್ಗದ ಭೂಹೀನ ಮಹಿಳಾ ಕೃಷಿ ಕಾರ್ಮಿಕರಿಗೆ
ಬೆಂಗಳೂರು ಭಾಗದ ಜಿಲ್ಲೆಗಳು: ಒಟ್ಟು ನೆರವು ₹25 ಲಕ್ಷ
(₹12.50 ಲಕ್ಷ ಉಚಿತ ಸಬ್ಸಿಡಿ + ₹12.50 ಲಕ್ಷ ಕಡಿಮೆ ಬಡ್ಡಿ ಸಾಲ)

ಇತರೆ ಜಿಲ್ಲೆಗಳು: ಒಟ್ಟು ನೆರವು ₹20 ಲಕ್ಷ
(₹10 ಲಕ್ಷ ಸಬ್ಸಿಡಿ + ₹10 ಲಕ್ಷ ಸಾಲ)

WhatsApp Group Join Now
Telegram Group Join Now

ಸಾಲದ ಬಡ್ಡಿ ದರ: ವಾರ್ಷಿಕ ಕೇವಲ 6%

ಹೆಚ್ಚುವರಿ ಸೌಲಭ್ಯ:
ನೀರಿನ ಸೌಲಭ್ಯ ಇಲ್ಲದ ಜಮೀನಿಗೆ ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್‌ವೆಲ್ ಜಿಲ್ಲಾವಾರು ಹಣಕಾಸು ಸೌಲಭ್ಯ ವಿವರ

ಭೂಮಿಯ ಮಾರುಕಟ್ಟೆ ಬೆಲೆಯನ್ನು ಆಧರಿಸಿ ಸರ್ಕಾರ ಜಿಲ್ಲೆಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿದೆ.

🔹 ಬೆಂಗಳೂರು ಭಾಗದ ಜಿಲ್ಲೆಗಳು
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ಈ ಜಿಲ್ಲೆಗಳಲ್ಲಿ ಜಮೀನು ದುಬಾರಿಯಾಗಿರುವುದರಿಂದ ಒಟ್ಟು ₹25 ಲಕ್ಷ ನೆರವು ನೀಡಲಾಗುತ್ತದೆ.
ಇದರಲ್ಲೂ ಅರ್ಧ ಹಣ (₹12.50 ಲಕ್ಷ) ಸರ್ಕಾರದಿಂದ ಉಚಿತ ಸಹಾಯಧನವಾಗಿದ್ದು, ಉಳಿದ ಮೊತ್ತವನ್ನು ಸಾಲವಾಗಿ ಪಡೆಯಬಹುದು.

🔹 ರಾಜ್ಯದ ಇತರೆ 27 ಜಿಲ್ಲೆಗಳು
ಇಲ್ಲಿ ಒಟ್ಟು ₹20 ಲಕ್ಷ ನೆರವು ಸಿಗುತ್ತದೆ.
ಅದರಲ್ಲೂ ₹10 ಲಕ್ಷ ಸಬ್ಸಿಡಿ ಮತ್ತು ₹10 ಲಕ್ಷ ಸಾಲ ರೂಪದಲ್ಲಿ ಲಭ್ಯ.

ಸಾಲ ಮರುಪಾವತಿ ವ್ಯವಸ್ಥೆ

ಈ ಯೋಜನೆಯ ಸಾಲವು ಬಡ ಕುಟುಂಬಗಳಿಗೆ ತೊಂದರೆ ಆಗದಂತೆ ವಿನ್ಯಾಸಗೊಳಿಸಲಾಗಿದೆ.
ಬಡ್ಡಿ ದರ: ಕೇವಲ 6%
ಮರುಪಾವತಿ ಅವಧಿ: 10 ವರ್ಷ
ಪಾವತಿ ವಿಧಾನ: ಪ್ರತಿ 6 ತಿಂಗಳಿಗೆ ಒಂದು ಕಂತು
ಇದರಿಂದ ಸಾಲದ ಹೊರೆ ಕಡಿಮೆ ಆಗುತ್ತದೆ.

ಮಹಿಳೆಯರಿಗೆ ವಿಶೇಷ ಭದ್ರತೆ
ಈ ಯೋಜನೆಯ ಪ್ರಮುಖ ವಿಶೇಷತೆ ಏನೆಂದರೆ, ಖರೀದಿಸಲಾದ ಜಮೀನು ಮನೆಯ ಹಿರಿಯ ಮಹಿಳೆಯ ಹೆಸರಿನಲ್ಲೇ ನೋಂದಣಿ ಮಾಡಲಾಗುತ್ತದೆ. ಇದು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಭದ್ರತೆ ಒದಗಿಸುತ್ತದೆ.

ಅರ್ಜಿ ಸಲ್ಲಿಸುವ ವಿಧಾನ (How to Apply)

ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ
👉 sevasindhu.karnataka.gov.in
ಲಾಗಿನ್ ಆಗಿ “Bhu Odetana Yojane / Land Ownership Scheme” ಎಂದು ಹುಡುಕಿ
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ:
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್
ಭೂಹೀನ ಕೃಷಿ ಕಾರ್ಮಿಕ ದೃಢೀಕರಣ ಪತ್ರ
ಅರ್ಜಿ ಸಲ್ಲಿಸಿ
📞 ಸಹಾಯವಾಣಿ: 94823 00400

ಘಟಕ ವೆಚ್ಚ ಸಂಕ್ಷಿಪ್ತ ಮಾಹಿತಿ

✴ಬೆಂಗಳೂರು ಭಾಗ: ₹25 ಲಕ್ಷ (₹12.50 ಲಕ್ಷ ಸಬ್ಸಿಡಿ + ₹12.50 ಲಕ್ಷ ಸಾಲ)
✴ಇತರೆ ಜಿಲ್ಲೆಗಳು: ₹20 ಲಕ್ಷ (₹10 ಲಕ್ಷ ಸಬ್ಸಿಡಿ + ₹10 ಲಕ್ಷ ಸಾಲ)

ಖರೀದಿಸಬಹುದಾದ ಭೂಮಿ: ಕನಿಷ್ಠ 2 ಎಕರೆ ಒಣ ಜಮೀನು / 1 ಎಕರೆ ನೀರಾವರಿ ಜಮೀನು

ಭೂಹೀನ ಮಹಿಳಾ ಕೃಷಿ ಕಾರ್ಮಿಕರಿಗೆ ಇದು ಜೀವನವನ್ನೇ ಬದಲಾಯಿಸುವ ಯೋಜನೆ. ಜಮೀನು ಮಾತ್ರವಲ್ಲ, ಗೌರವ, ಭದ್ರತೆ ಮತ್ತು ಭವಿಷ್ಯವನ್ನೂ ಒದಗಿಸುವ ಸರ್ಕಾರದ ಮಹತ್ವದ ಹೆಜ್ಜೆ ಇದಾಗಿದೆ.

Leave a Reply

Your email address will not be published. Required fields are marked *